Thursday, April 02, 2009

ರಾಮ ನವಮಿಯ ಶುಭಾಶಯಗಳು

ವೇದೇ ವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೆ ¦
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನ ¦¦



ಮೇಲಿನ ಶ್ಲೋಕಕ್ಕೆ ಡಿವಿಜಿ ಯವರು ಎರಡು ಅನ್ವಯಾರ್ಥಗಳನ್ನು ಕೊಡುತ್ತಾರೆ.

ಮಹಾವಿಷ್ಣುವು ಶ್ರೀರಾಮನಾಗಿ ಮನುಷ್ಯ ರೂಪದಲ್ಲಿ ಅವತರಿಸಿದನು; ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು.


ಶ್ರೀರಾಮನು ಮನುಷ್ಯನಾಗಿ ಹುಟ್ಟಿ ಮಹಾವಿಷ್ಣು ಪದವಿಗೆ ಏರಿದನು; ತದನುಸಾರವಾಗಿ ವಾಲ್ಮೀಕಿ ಪ್ರಣೀತ ರಾಮಾಯಣವು ವೇದಪ್ರಾಯವಾಯಿತು.


ರಾಮ ನವಮಿಯ ಇಂದಿನ ಶುಭದಿನದಂದು ಮನುಷ್ಯ ಪ್ರಯತ್ನದ ಮಹತ್ವವನ್ನು ಕೊಂಡಾಡುವ ಎರಡನೇ ಶ್ಲೋಕವು ನಮಗೆ ಸ್ಫೂರ್ತಿಯನ್ನು ನೀಡಲಿ!


ಮನುಷ್ಯರ ಮೇಲೆ ಭಗವಂತನ ಪ್ರೀತಿಯನ್ನು ಸೂಚಿಸುವ ಅವತಾರ ತತ್ತ್ವವನ್ನು ಕೊಂಡಾಡುವ ಮೊದಲನೇ ಶ್ಲೋಕವು ಬಾಳಿಗೊಂದು ಭರವಸೆಯನ್ನು ನೀಡಲಿ!!

¦¦ ಜಯ ಶ್ರೀರಾಮ ¦¦

Labels: , , , , ,